ನಂಬಿಕೆ ಹುಸಿಯಾಗದಿರಲಿ

ಹರಿಯೆ ಹಗಲಿರುಳು ನಿನ್ನ ಧ್ಯಾನಿಸುವೆ
ನನ್ನ ನಂಬಿಕೆ ಮಾತ್ರ ಹುಸಿಯಾಗದಿರಲಿ
ಸ್ವಾರ್ಥ ವಂಚನೆಗಳಿಗೆ ನನ್ನ ಮನ ಹರಿದು
ಮತ್ತೆ ಪ್ರಾಪಂಚಿಕ ವ್ಯಾಮೋಹದಿ ಹಸಿಯಾಗದಿರಲಿ

ಹೆಜ್ಜೆ ಹೆಜ್ಜೆ ನಿನ್ನ ನೆನಪು ಗುನಿಗುನಿಸು ತಿರಲಿ
ನಿಂತರೂ ನಡೆದಾಡಿದರೂ ನಿನ್ನ ಮರೆಯದಿರಲಿ
ಸಂತರ ಪುಣ್ಯವಂತರ ಜೀವನ ಕ್ರಮ ನೆನೆಯಲಿ
ಅಪನಂಬಿಕೆಯ ಹಾಳುಪುಟ ತೆರೆಯದಿರಲಿ

ವಿಷಯ ಲಂಪಟತೆಯ ಜನರಿಂದ ದೂರವಿರಲಿ
ಯಾವ ಕಾರಣಕ್ಕೆ ಅಲ್ಲಿ ಚರ್ಚೆ ಬೇಡದಿರಲಿ
ಬದುಕು ನಾಮ ಸ್ಮರಣೆದಿ ನಿತ್ಯ ತುಂಬಿಕೊಳ್ಳಲಿ
ಮತ್ತೆ ಮತ್ತೆ ನಾನು ನನ್ನದು ಕಾಡದಿರಲಿ

ಉಸಿರು ಉಸಿರುಗಳೆಲ್ಲ ತುಂಬಲಿ ಹರಿಯನಾಮ
ಎದೆಯ ಗೂಡಿನಲಿ ಹರಿಯ ಪಾದವಿರಲಿ
ಜನ್ಮ ಜನ್ಮಕ್ಕು ಹರಿಯೆ ನನ್ನ ದೈವವಾಗಲಿ
ಮಾಣಿಕ್ಯ ವಿಠಲನ ನಾಮ ಸ್ವಾದವಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಏನೆಂದರೇನು?
ಪಾಳೇಗಾರ Next post ಪಾಳಯಗಾರರು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys